ಇತ್ತೀಚಿನ ಸುದ್ಧಿ ಹಾಗೂ ಕಾರ್ಯಕ್ರಮಗಳು
ಬಿ.ಎಲ್.ಡಿ.ಇ.ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ.ಬಿ.ಪಾಟೀಲರು ಮತ್ತು ಸದಸ್ಯರು ಈ ಮಹಾತ್ಮನ ಹೆಸರು ಶಾಶ್ವತವಾಗಿ ನೆಲೆ ನಿಲ್ಲುವಂತೆ ಅತ್ಯಂತ ಕೃತಜ್ಞತೆಯಿಂದ, ಶ್ರದ್ಧಾಭಕ್ತಿಯಿಂದ ಒಂದು ಅಪರೂಪದ ಸ್ಮಾರಕಭವನವನ್ನು 2003ರಲ್ಲಿ ನಿರ್ಮಿಸಿದರು. 770 ಸಮರ ಗಣಾಧೀಶ್ವರರ ಲಿಂಗದ ಗುಡಿ ಮತ್ತು ಫ.ಗು.ಹಳಕಟ್ಟಿಯವರ ಸಮಾಧಿಯ ಪಕ್ಕದಲ್ಲಿರುವ ಈ ಭವನ ಇಂದು ಈ ನಾಡಿನ ಯಾತ್ರಾಸ್ಥಳವಾಗಿದೆ. ಭವನದ ಎದುರುಗಡೆ ಎರಡಾಳೆತ್ತರದ ಹಳಕಟ್ಟಿಯವರ ಪ್ರತಿಮೆ ಯಾತ್ರಿಕರನ್ನು ಸಹ ಸ್ವಾಗತಿಸುತ್ತಿದೆ.
ಬಿ.ಎಲ್.ಡಿ.ಇ.ಸಂಸ್ಥೆಯ ಅಧ್ಯಕ್ಷರು, ಶಿಕ್ಷಣಾಭಿಮಾನಿಗಳು, ಜನನಾಯಕರೂ ಆದ ಡಾ. ಎಂ.ಬಿ.ಪಾಟೀಲರು ಈ ಸ್ಮಾರಕ ಭವನದಲ್ಲಿ ನಿರಂತರವಾಗಿ ಸಂಶೋಧನೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಮುಂದಾದರು. ಮೊದಲ ಯೋಜನೆಯಾಗಿ ಡಾ ಫ.ಗು.ಹಳಕಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಸಂಶೋಧಿಸಿ, ಪ್ರಕಟಿಸಿದ ಸಮಗ್ರ ಸಾಹಿತ್ಯ ನಶಿಸಿ ಹೋಗದಂತೆ ಪುನರ್ ಮುದ್ರಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿತ್ತು. ಆ ಕಾರ್ಯವನ್ನು ಅನುಷ್ಠಾನಗೊಳಿಸಿ ಈ ಯೋಜನೆ ಪೂರ್ಣಗೊಳಿಸಿದರು. 12,500 ಪುಟಗಳಿಂದ ಕೂಡಿದ 15 ಸಂಪುಟಗಳನ್ನು 2008ರ ಜನವರಿ 30ರಂದು ಅತ್ಯಂತ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಲೋಕಾರ್ಪಣೆಗೊಳಿಸಿದರು.
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳು
| ಅ.ನಂ | ಜರುಗಿದ ಕಾರ್ಯಕ್ರಮ | ದಿನಾಂಕ | 
| 1 | ಅಖಿಲ ಕರ್ನಾಟಕ ಮೂರನೆ ಹಸ್ತಪ್ರತಿ ಸಮ್ಮೇಳನ | 16 ಮತ್ತು 17 ಸಪ್ಟಂಬರ್ 2005 | 
| 2 | ಡಾ. ರಂ.ಶ್ರೀ.ಮುಗಳಿ ಜನ್ಮ ಶತಮಾನೋತ್ಸವ ಸಮಾರಂಭ | 26/3/2006 | 
| 3 | ಸಂಶೋಧನ ಕಮ್ಮಟ | 2 ರಿಂದ 7 ಎಪ್ರಿಲ್ 2007 | 
| 4 | ಡಾ.ಎಂ.ಎಂ.ಕಲಬುರ್ಗಿ ವಿಚಾರ ಸಂಕಿರಣ – ಸಂಮಾನ ಸಮಾರಂಭ | 20/5/2007 | 
| 5 | ಡಾ.ಫ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಂಪುಟಗಳ ಬಿಡುಗಡೆ ಸಮಾರಂಭ | 30/1/2008 | 
| 6 | ವಿಚಾರ ಸಂಕಿರಣ – ಗಡಿನಾಡ ಕನ್ನಡಿಗರ ಸ್ಥಿತಿ-ಗತಿ ಒಂದು ನೋಟ | 21/2/2008 | 
| 7 | ಹಸ್ತಪ್ರತಿ ತರಬೇತಿ ಮತ್ತು ಜಾಗೃತಿ ಶಿಬಿರ | 23 ರಿಂದ 25 ಮಾರ್ಚ 2008 | 
| 8 | ಡಾ.ಫ.ಗು.ಹಳಕಟ್ಟಿಯವರ 128ನೇ ಜನ್ಮ ಶತಮಾನೋತ್ಸವ | 2/7/2008 | 
| 9 | ಚಿಂತನ ಸಾಂಸ್ಕೃತಿಕ ಬಳಗ ಉದ್ಘಾಟನೆ | 22/3/2009 | 
| 10 | ಶರಣ ಸಂಸ್ಕೃತಿ ಸಂವಾದ ಗೋಷ್ಠಿ | 5/5/2009 | 
| 11 | ಪದ್ಮಶ್ರೀ ಡಾ. ವಿ.ಕೃ. ಗೋಕಾಕರ ಜನ್ಮಶತಮಾನೋತ್ಸವ ಸಮಾರಂಭ | 13/6/2009 | 
| 12 | ಹಳಕಟ್ಟಿಯವರ ಜನ್ಮದಿನಾಚರಣೆ | 2/07/2009 | 
| 13 | ಉಪನ್ಯಾಸ ಕಾರ್ಯಕ್ರಮ “ಪುನರುತ್ಥಾನದ ಪುಣ್ಯ ಪುರುಷರು” | 27/07/2009 | 
| 14 | ನಾಟಕೋತ್ಸವ, ಕಾರಂತ ರಂಗ ನಮನ (ಸಹಪ್ರಾಯೋಜಕತ್ವ) | 2,3 ಮತ್ತು 4 ಅಕ್ಟೋಬರ್ 2009 | 
| 15 | ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ಮುಂಬಯಿ-ಮಹಾರಾಷ್ಟ್ರ (ಸಹಪ್ರಾಯೋಜಕತ್ವ) | 30, 31 ಜನವರಿ 2010 | 
| 16 | ಅಖಿಲ ಕರ್ನಾಟಕ ಆರನೆಯ ಹಸ್ತಪ್ರತಿ ಸಮ್ಮೇಳನ ಬಸವನ ಬಾಗೇವಾಡಿ (ಸಹಯೋಗದಲ್ಲಿ) | 23, 24 ಫೆಬ್ರುವರಿ 2010 | 
| 17 | ಉಪನ್ಯಾಸ ಕಾರ್ಯಕ್ರಮ “ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂದಲ್ಲಿ ಪೂರ್ಣಪ್ರಜ್ಞೆ” | 27/02/2010 | 
| 18 | ವಚನ ಅನುವಾದ ಶಿಬಿರ (ನಿರ್ದೇಶಕರಾದ
 ಡಾ. ಎಂ.ಎಂ. ಕಲಬುರ್ಗಿ, ಶ್ರೀ ಅರವಿಂದ ಜತ್ತಿ, ಅಧ್ಯಕ್ಷರು ಬಸವ ಸಮಿತಿ, ಪ್ರೊ. ಎಂ. ಪ್ರಸನ್ನಕುಮಾರ)  | 
2010 ರ ಮಾರ್ಚ್ 26 ರಿಂದ 29 | 
| 19 | ಡಾ. ಫ.ಗು. ಹಳಕಟ್ಟಿಯವರ ಜನ್ಮದಿನಾಚರಣೆ | 2/07/2010 | 
| 20 | ಉಪನ್ಯಾಸ ಕಾರ್ಯಕ್ರಮ “ಪರಿಸರ ಮತ್ತು ಶಿಕ್ಷಣದ ಸವಾಲುಗಳು” (ಮುಖ್ಯ ಅತಿಥಿಗಳು ಪ್ರೊ. ಬಿ.ಕೆ. ಚಂದ್ರಶೇಖರ, ಮಾಜಿ ಶಿಕ್ಷಣ ಸಚಿವರು) | 27/07/2010 | 
| 21 | ಸ.ಸ. ಮಾಳವಾಡ ಜನ್ಮಶತಮಾನೋತ್ಸವ | 14/11/2010 | 
| 22 | ಡಾ. ಶ್ರೀ ಶಿವಮೂರ್ತಿ ಮುರಘಾ ಶರಣರು
 “ಈ ಶತಮಾನದ ಸವಾಲುಗಳು“  | 
08/07/2011 | 
| 23 | ಶ್ರೀ ಸುರೇಶ ಹೆಬ್ಳೀಕರ
 “ನಮ್ಮ ಪರಿಸರ“  | 
27/07/2011 | 
| 24 | ಡಾ. ಗಿರೀಶ ಕಾರ್ನಾಡ
 “ಆಡಾಡತ ಆಯುಷ್ಯ“  | 
07/01/2012 | 
| 25 |  ಡಾ. ಜಗದೀಶ ಜಾಂಬೋಟಿ
 ಪರ್ಥ, ಪಶ್ಚಿಮ ಆಸ್ಟ್ರೇಲಿಯಾ. “ವಿದೇಶಗಳಲ್ಲಿ ಬಸವ ತತ್ವ ಪ್ರಸಾರ”  | 
22/05/2012 | 
| 26 | ಉಪನ್ಯಾಸಕರು: 1) ಡಾ. ಜಯಶ್ರೀ ದಂಡೆ
 2)ಡಾ. ಚಿಕ್ಕಳಾ ಜೆ. ಮಠಪತಿ “ಡಾ. ಶೈಲಜಾ ಉಡಚಣ ಬದುಕು-ಬರಹ”  | 
30/06/2012 | 
| 27 | ಶ್ರೀ ಬಿ. ಎಲ್. ಶಂಕರ
 ಮಾಜಿ ಸಭಾಪತಿಗಳು, ಕರ್ನಾಟಕ ವಿಧಾನ ಪರಿಷತ್ತು. “ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು”  | 
27/07/2012 | 
| 28 | ಡಾ. ರಾಜೇಂದ್ರಸಿಂಗ್ ಉಪನ್ಯಾಸ “ಸಮುದಾಯ ಆಧಾರಿತ ವಿಕೇಂದ್ರಿಕೃತ ನೀರು ನಿರ್ವಹಣೆ” | 27/07/2013 | 
| 29 | 6ನೇ ಹಾಲುಮತ ಸಂಸ್ಕೃತಿ ಸಮ್ಮೇಳನ “ಬೀರಪ್ಪನ ಪರಂಪರೆ” | 22 ಮತ್ತು 23 ಫೆಬ್ರವರಿ 2014 | 
| 30 | ಡಾ. ಎಸ್.ಎಂ. ಜಾಮದಾರ್, ಉಪನ್ಯಾಸ ‘ಸಂಕಟದಲ್ಲಿ ಉನ್ನತ ಶಿಕ್ಷಣ’ | 27-07-2014 | 
| 31 | ಆದಿಲ್ ಶಾಹಿ ಕಾಲದ ಮೂಲ ಪರ್ಶಿಯನ್, ದಖನಿ, ಉರ್ದು ಸಾಹಿತ್ಯ ಕನ್ನಡ ಅನುವಾದ, 6 ಸಂಪುಟಗಳ ಬಿಡುಗಡೆ ಸಮಾರಂಭ | 27-02-2015 | 
| 32 | ಪದ್ಮಭೂಷಣ ಡಾ. ಎಂ. ಮಹದೇವಪ್ಪ ಉಪನ್ಯಾಸ
 ‘ಕೃಷಿ ಸಂಶೋಧನೆ-ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆ’  | 
27-07-2015 | 
| 33 | ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ | 15-12-2015 | 
| 34 | ಸಾಧಕರಿಗೆ ಸನ್ಮಾನ ಡಾ. ಕುಶಾಲದಾಸ (ಡಾ. ರಾಜಾರಾಮಣ್ಣ ಶ್ರೇಷ್ಠ ವಿಜ್ಞಾನಿ ಪ್ರಶಸ್ತಿ ವಿಜೇತರು) ಡಾ. ಡಿ.ಪಿ. ಬಿರಾದಾರ (ಕುಲಪತಿಗಳು, ಧಾರವಾಡ ಕೃಷಿ ವಿಶ್ವವಿದ್ಯಾಲಯ) ಡಾ. ರಾಜೇಂದ್ರಸಿಂಗ್ (ವರ್ಲ್ಡ್ ವಾಟರ್ ಪ್ರೈಜ್ ವಿಜೇತರು)  | 
04-01-2016 | 
| 35 | ಶ್ರೀ ಪ್ರಸನ್ನ ಉಪನ್ಯಾಸ
 ಯುವಜನತೆ : ಸರಳ ಬದುಕಿನ ದಾರಿ  | 
27-07-2016 | 
| 36 | ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ | 30-08-2016 | 
| 37 | ಹಳೆಬೇರು-ಹೊಸಚಿಗುರು(ಸಾಹಿತ್ಯ-ಸಂವಾದ) | 20-12-2016 | 
| 38 | ಮಹಾವ್ಯಾಘ್ರ ಪಂಡಿತ ವಿದ್ಯಾಸಿಂಹಾಚಾರ್ಯ ಮಾಹುಲಿ ಇವರ ಉಪನ್ಯಾಸ “ದೇವರು” ಒಂದು ಚಿಂತನೆ | 16-04-2017 | 
| 39 | ‘ಸಾಠ್ ಗಜಲ್’ ಕೃತಿಯ ಲೋಕಾರ್ಪಣೆ | 02-07-2017 | 
| 40 | ಡಾ. ಆರ್.ವ್ಹಿ.ಜಹಗೀರದಾರ ಇವರ ಉಪನ್ಯಾಸ ಶ್ರೀ ಅರವಿಂದರು : ಒಂದು ಚಿಂತನ | 16-07-2017 | 
| 41 | ಚಿಂತನ -ಸಾಂಸ್ಕೃತಿಕ ಬಳಗ
 ಮುಖ್ಯ ಅತಿಥಿಗಳು ಸನ್ಮಾನ್ಯ ಶ್ರೀ ಎಚ್.ಡಿ.ದೇವೇಗೌಡ & ದಿವ್ಯ ಸಾನ್ನಿಧ್ಯ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳು  | 
27-07-2017 | 
| 42 | ‘ನಾಡೋಜ ಡಾ. ಎಂ.ಎಂ. ಕಲಬುರ್ಗಿ ಅವರ ನೆನಪು’ | 30-08-2017 | 
| 43 | ಕನ್ನಡ ಗ್ರಂಥಸಂಪಾದಕರ ಸಾಧನೆ ಮಾಲೆ
 ವಿಚಾರ ಸಂಕಿರಣ-3  | 
24-10-2017 | 
| 44 | ‘ಪೇಂಟಿಂಗ್/ಚಿತ್ರಕಲಾ ಸ್ಪರ್ಧೆ’  ಭಾರತೀಯ ರಾಷ್ಟ್ರೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ,
 ಪ್ರತಿಷ್ಠಾನ-ನವದೆಹಲಿ  | 
08-02-2018 | 
| 45 | ಪ್ರೊ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ,
 ಸಾಧಕರಿಗೆ ಸನ್ಮಾನ  | 
16-02-2018 | 
| 46 | ಶರಣ ಶಿವಯೋಗೆಪ್ಪ ಸಿದ್ಧಲಿಂಗಪ್ಪ ತಂಬಾಕೆ ಇವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ | 28-02-2018 |